ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಎಫ್ಎಂಸಿ ಇಂಡಿಯಾ ನಿರಂತರವಾಗಿ ಕೃಷಿ ಸಮುದಾಯಕ್ಕೆ ಸೇವೆ ಸಲ್ಲಿಸಲು ನಾವೀನ್ಯತೆಯ ಹುಡುಕಾಟದಲ್ಲಿರುತ್ತದೆ ಮತ್ತು FMC Asia APAC team inaugurates Project SAFFALಭಾರತದಲ್ಲಿ ಸುಸ್ಥಿರ ಕೃಷಿಯನ್ನು ಉತ್ತೇಜಿಸುತ್ತದೆ. 2018 ರ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಮೆಕ್ಕೆಜೋಳ ಬೆಳೆಗಳ ಮೇಲೆ ದಾಳಿ ಮಾಡಿದ ಫಾಲ್ ಸೈನಿಕ ಹುಳುವಿನ (ಎಫ್ಎಡಬ್ಲ್ಯೂ) ಭೀತಿಯನ್ನು ನಿಭಾಯಿಸಲು, ಎಫ್ಎಂಸಿಯು ದಕ್ಷಿಣ ಏಷ್ಯಾ ಬಯೋಟೆಕ್ ಕನ್ಸೋರ್ಟಿಯಂ (ಎಸ್ಎಬಿಸಿ), ಭಾರತದಲ್ಲಿನ ಒಂದು ವಿಜ್ಞಾನ ಸಮರ್ಥಕ ಚಿಂತನಾ ಕೇಂದ್ರದೊಂದಿಗೆ ಕೈಜೋಡಿಸಿದೆ. ಈ ಕೆಳಗಿನ ಉದ್ದೇಶಗಳೊಂದಿಗೆ ಪ್ರಾಜೆಕ್ಟ್ ಅನ್ನು ಎಫ್ಎಂಸಿ ಪ್ರಾಜೆಕ್ಟ್ ಸಫಲ್ (ಕೃಷಿ ಮತ್ತು ರೈತರನ್ನು ಫಾಲ್ ಆರ್ಮಿ ವರ್ಮ್‌ನ ಭೀತಿಯಿಂದ ರಕ್ಷಿಸುವುದು) ಎಂದು ಹೆಸರಿಸಲಾಯಿತು:

  • ವೈಜ್ಞಾನಿಕ ದತ್ತಾಂಶ ಮತ್ತು ಅನುಭವ ಹಾಗೂ ಪ್ರತಿಷ್ಠಿತ ದೇಶೀಯ ಮತ್ತು ಅಂತರರಾಷ್ಟ್ರೀಯ ಮೂಲಗಳಿಂದ ಪರಿಶೀಲನೆ ಮಾಡಬಹುದಾದ ವರದಿಗಳ ಆಧಾರದ ಮೇಲೆ ಫಾಲ್ ಸೈನಿಕ ಹುಳುವಿನ ಕುರಿತು ಜ್ಞಾನ ಭಂಡಾರವನ್ನು ಅಭಿವೃದ್ಧಿಪಡಿಸುವುದು
  • ಐಪಿಎಂ ಅಭ್ಯಾಸಗಳ ಪ್ಯಾಕೇಜ್ ಅನ್ನು ಪ್ರದರ್ಶಿಸಲು ಆಯಾ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಗಳ ಸಹಯೋಗದೊಂದಿಗೆ ಕೃಷಿ ಪ್ರದರ್ಶನಗಳನ್ನು ಆಯೋಜಿಸುತ್ತದೆ
  • ಮಾಹಿತಿಯನ್ನು ವಿಸ್ತರಿಸಲು ನೆಟ್ವರ್ಕ್ ಮತ್ತು ಸಂಸ್ಥೆಗಳ ರೆಪಾಸಿಟರಿಯೊಂದಿಗೆ ಎಫ್‌ಎಡಬ್ಲ್ಯುನಲ್ಲಿ ಕೆಲವು ಸಮರ್ಪಿತ ವೆಬ್-ಆಧಾರಿತ ಪೋರ್ಟಲ್
  • ಸಾಮರ್ಥ್ಯ ನಿರ್ಮಾಣ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ

Hon’ble Union Minister of State for Agriculture and Farmer’s Welfare Shri Parshottam Ji Rupala launched Project SAFFALಈ ಯೋಜನೆಯನ್ನು ಎಫ್ಎಂಸಿ ಏಷ್ಯಾ ಪೆಸಿಫಿಕ್ ಪ್ರದೇಶ ಅಧ್ಯಕ್ಷೆ ಮಿಸ್. ಬೆಥ್ವಿನ್ ಟಾಡ್, ಎಫ್ಎಂಸಿ ಇಂಡಿಯಾ ಅಧ್ಯಕ್ಷ ಶ್ರೀ ಪ್ರಮೋದ್ ಮತ್ತು ಎಫ್ಎಂಸಿ ಇಂಡಿಯಾ ನಾಯಕತ್ವ ತಂಡದ ಸದಸ್ಯರು ಉದ್ಘಾಟಿಸಿದರು. ಪ್ರಾಜೆಕ್ಟ್ ಸಫಲ್ ಸ್ವತಃ ಒಂದು ಕೇಸ್ ಸ್ಟಡಿ ಆಗಿ ಮಾರ್ಪಟ್ಟಿದೆ. ಇದು ಅಂತಾರಾಷ್ಟ್ರೀಯ ಸಸ್ಯ ಸಂರಕ್ಷಣೆ ಸಮ್ಮೇಳನ, ಏಷ್ಯನ್ ಸೀಡ್ ಕಾಂಗ್ರೆಸ್, ಎಫ್‌ಎಡಬ್ಲ್ಯು ಇಂಡೋನೇಷ್ಯಾ ಮುಂತಾದ ವಿವಿಧ ಜಾಗತಿಕ ಮತ್ತು ಸ್ಥಳೀಯ ವೇದಿಕೆಗಳಲ್ಲಿ ಅತ್ಯುತ್ತಮ ತಳಮಟ್ಟದ ವಿಸ್ತರಣಾ ಯೋಜನೆಯಾಗಿ ಸಾಕಷ್ಟು ಮೆಚ್ಚುಗೆ ಮತ್ತು ಮನ್ನಣೆಯನ್ನು ಗಳಿಸಿತು.

Project SAFFAL exemplified FMC culture of excellence through Team-work with Corporate Affairs, Regulatory, R&D and Commercial Teamsಕಳೆದ 18 ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಾಜೆಕ್ಟ್ ಸಫಲ್ ಈಗ ರೈತರು ಮತ್ತು ಸರ್ಕಾರಿ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯಗಳು, ಕೆವಿಕೆ, ಎನ್‌ಜಿಒಗಳು ಮುಂತಾದ ಇತರ ಪಾಲುದಾರರಲ್ಲಿ ಫಾಲ್ ಸೈನಿಕ ಹುಳುವಿನ ಬಗ್ಗೆ ಸಾಮೂಹಿಕ ಜಾಗೃತಿಗೆ ಕಾರಣವಾಗಿದೆ. ಈ ವಿನಾಶಕಾರಿ ಕೀಟವನ್ನು ನಿಯಂತ್ರಿಸಲು ಇದು ಉತ್ತಮ ಕೃಷಿ ಅಭ್ಯಾಸಗಳನ್ನು ಉತ್ತೇಜಿಸುತ್ತದೆ ಮತ್ತು ಜಾಗೃತಿ ಮತ್ತು ಸಾಮರ್ಥ್ಯ ನಿರ್ಮಾಣದ ಮೂಲಕ ದೇಶದ ರೈತರು ಕೀಟವನ್ನು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ನಿವಾರಿಸಲು ಸಹಾಯ ಮಾಡುತ್ತದೆ.

Project SAFFALಈ ಯೋಜನೆಯಡಿ ಅಭಿವೃದ್ಧಿಪಡಿಸಿದ ಫಾಲ್ ಸೈನಿಕ ಹುಳು ವೆಬ್‌ಸೈಟ್ www.fallarmyworm.org.in ಕೀಟದ ಸುತ್ತಮುತ್ತ ಭಾರತದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೆ ಮಾನದಂಡ ಮತ್ತು ಉಲ್ಲೇಖವಾಗಿದೆ. ಭಿತ್ತಿಪತ್ರಗಳು, ಕರಪತ್ರಗಳು, ಆಟಿಕೆಗಳು ಮುಂತಾದ ಜಾಗೃತಿ ಮೂಡಿಸಲು ರಚಿಸಿದ ಪ್ರಚಾರದ ವಸ್ತುಗಳನ್ನು ಮೆಕ್ಕೆಜೋಳ ಬೆಳೆಯುವ ರಾಜ್ಯಗಳಾದ್ಯಂತ ಕೃಷಿ ಇಲಾಖೆಗಳು ಮತ್ತು ವಿಶ್ವವಿದ್ಯಾಲಯಗಳು ವ್ಯಾಪಕವಾಗಿ ಬಳಸಿದವು.

ಕಾರ್ಪೊರೇಟ್ ವ್ಯವಹಾರಗಳು, ನಿಯಂತ್ರಣ, ಆರ್ ಮತ್ತು ಡಿ ಮತ್ತು ವಾಣಿಜ್ಯ ತಂಡಗಳೊಂದಿಗೆ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಶ್ರೇಷ್ಠತೆಯ ಎಫ್ಎಂಸಿ ಸಂಸ್ಕೃತಿಗೆ ಪ್ರಾಜೆಕ್ಟ್ ಸಫಲ್ ಉದಾಹರಣೆಯಾಗಿದೆ. ಯೋಜನೆಯ ವಾರ್ಷಿಕ ವರದಿಯನ್ನು ಇತ್ತೀಚೆಗೆ ನವದೆಹಲಿಯಲ್ಲಿ ಬಿಡುಗಡೆ ಮಾಡಲಾಯಿತು.

ಈ ಪ್ರಮುಖ ಮಾಹಿತಿ ಅರಿವಿನ ನಾಯಕತ್ವ ಉಪಕ್ರಮವು ಯಶಸ್ವಿಯಾಗಿ 2 ವರ್ಷ ಪೂರೈಸಿದ್ದನ್ನು ನಾವು ಆಚರಿಸುತ್ತಿರುವಾಗ, ಸಫಲ್ ತಂಡವು ಈಗಾಗಲೇ ಹಲವು ಪ್ರಥಮಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

“ನಮ್ಮ ವಿಶಾಲ ಜಾಗತಿಕ ಜ್ಞಾನ ಮತ್ತು ಸುಸ್ಥಿರ ಪರಿಹಾರಗಳ ಮೂಲಕ ಭಾರತದ ರೈತರಿಗೆ ಸೇವೆ ಸಲ್ಲಿಸುವ ಈ ಅವಕಾಶ ಸಿಕ್ಕಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ" ಎಂದು ನಮ್ಮ ಮುಂಬೈ ಮುಖ್ಯ ಕಚೇರಿಯಲ್ಲಿ ಮೇ 2019 ರಲ್ಲಿ ಯೋಜನೆಯನ್ನು ಪ್ರಾರಂಭಿಸುವಾಗ ಬೆಥ್ವಿನ್ ಅವರು ಹೇಳಿದರು.

“ಪ್ರಾಜೆಕ್ಟ್ ಸಫಲ್ ಎನ್ನುವುದು ಎಫ್ಎಂಸಿಯ ಇನ್ನೊಂದು ಉಪಕ್ರಮವಾಗಿದ್ದು, ಇದು ತಮ್ಮ ಬೆಳೆಗಳನ್ನು ಫಾಲ್ ಸೈನಿಕ ಹುಳುವಿನಂತಹ ವಿನಾಶಕಾರಿ ಕೀಟಗಳ ವಿರುದ್ಧ ರಕ್ಷಿಸಿಕೊಳ್ಳಲು ಭಾರತೀಯ ರೈತರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ, ಇದು ರೈತರ ಆದಾಯ ಮತ್ತು ಕೃಷಿ ಸುಸ್ಥಿರತೆಯನ್ನು ಹೆಚ್ಚಿಸುತ್ತದೆ. ಸಫಲ್‌ ಯೋಜನೆಯೊಂದಿಗೆ ಈ ಪ್ರಯತ್ನದಲ್ಲಿ ಎಸ್‌ಎಬಿಸಿ ಜೊತೆಗೆ ಪಾಲುದಾರಿಕೆ ಮಾಡಲು ನಾವು ಹೆಮ್ಮೆಪಡುತ್ತೇವೆ." - ಪ್ರಮೋದ್ ತೋಟ, ಎಫ್‌ಎಂಸಿ ಇಂಡಿಯಾ ಅಧ್ಯಕ್ಷ, ಎಜಿಎಸ್ ವ್ಯವಹಾರ ನಿರ್ದೇಶಕ.

“ನಾವು ಒಟ್ಟಾಗಿ ಒಳನಾಡಿನ ಕೃಷಿ ವಿಸ್ತರಣಾ ವ್ಯವಸ್ಥೆಯಲ್ಲಿ ಗಮನಾರ್ಹ ಕ್ರಾಂತಿ ಮಾಡಿದ್ದೇವೆ. ಭಾರತದಲ್ಲಿ ಸಾಮಾಜಿಕ-ಆರ್ಥಿಕ, ಆಹಾರ ಮತ್ತು ಆಹಾರ ಭದ್ರತೆಗೆ ಎದುರಾಗುವ ಅಪಾಯವನ್ನು ತಪ್ಪಿಸಲು ಸಹಾಯ ಮಾಡಲು ನಾವು ಐಸಿಎಆರ್ ಸಂಸ್ಥೆಗಳು, ಕೆವಿಕೆಗಳು, ಎಸ್ಎಯು ಗಳು ಮತ್ತು ರಾಜ್ಯ ಕೃಷಿ ಇಲಾಖೆಗಳು ಮತ್ತು ಎನ್‌ಜಿಒಗಳು ಸೇರಿದಂತೆ ವಿವಿಧ ಸಂಸ್ಥೆಗಳನ್ನು ಯಶಸ್ವಿಯಾಗಿ ಒಟ್ಟಿಗೆ ತರಬಹುದು", - ಎಂದು ದಕ್ಷಿಣ ಏಷ್ಯಾ ಜೈವಿಕ ತಂತ್ರಜ್ಞಾನ ಕೇಂದ್ರದ ಅಧ್ಯಕ್ಷರಾದ ಡಾ. ಸಿ.ಡಿ ಮಾಯೀ ಹೇಳಿದರು.

“ಈ ಯೋಜನೆಯ ಯಶಸ್ಸು ಸರ್ಕಾರಿ ಇಲಾಖೆಗಳು, ನಿಯಂತ್ರಕ, ಆರ್ ಮತ್ತು ಡಿ ಮತ್ತು ವಾಣಿಜ್ಯ ತಂಡಗಳ ಅತ್ಯುತ್ತಮ ಪರಿಶ್ರಮದ ಜೊತೆಗೆ ಎಫ್ಎಂಸಿ ತಂಡದ ಒಗ್ಗಟ್ಟಿನ ಪ್ರಯತ್ನದ ಉತ್ತಮ ಪ್ರದರ್ಶನ ಕೂಡ ಆಗಿದೆ. ಎಪಿಎಸಿ ಮಟ್ಟದಲ್ಲಿ ಯೋಜನೆಯ ಆಂತರಿಕ ಮನ್ನಣೆಯು ತುಂಬಾ ತೃಪ್ತಿಕರವಾಗಿದೆ" - ರಾಜು ಕಪೂರ್, ಸಾರ್ವಜನಿಕ ಮತ್ತು ಕೈಗಾರಿಕಾ ವ್ಯವಹಾರಗಳ ಮುಖ್ಯಸ್ಥರು.

ಮಣ್ಣಿನ ಆರೋಗ್ಯ

ಸುರಕ್ಷಿತ ಆಹಾರ ಮತ್ತು ಸುಸ್ಥಿರ ಕೃಷಿಗೆ ಕಾರಣವಾಗುವ ರೀತಿಯಲ್ಲಿ ತಮ್ಮ ಬೆಳೆಯನ್ನು ಹೆಚ್ಚಿಸಲು ಸಹಾಯ ಮಾಡಲು ರೈತರಿಗೆ ಬೆಂಬಲ ನೀಡಲು ಎಫ್ಎಂಸಿ ಇಂಡಿಯಾ ಬದ್ಧವಾಗಿದೆ. ಎಫ್ಎಂಸಿ ಕ್ಷೇತ್ರ ತಜ್ಞರು, ಮಣ್ಣಿನ ಆರೋಗ್ಯವನ್ನು ಉಳಿಸಿಕೊಳ್ಳುವ ಗುರಿ ಹೊಂದಿರುವ ಉತ್ತಮ ಕೃಷಿ ಪದ್ಧತಿಗಳು, ಕೃಷಿ ಸಂಪನ್ಮೂಲಗಳ ಸುಸ್ಥಿರ ರೀತಿಯ ಬಳಕೆ ಮತ್ತು ಕೃಷಿಯನ್ನು ಹೆಚ್ಚು ಲಾಭದಾಯಕ ಮತ್ತು ಸುರಕ್ಷಿತವಾಗಿಸುವ ಕುರಿತು ಭಾರತದಾದ್ಯಂತ ಇರುವ ರೈತರಿಗೆ ತರಬೇತಿ ನೀಡುತ್ತಾರೆ.

ಎಫ್ಎಂಸಿ ಕ್ಷೇತ್ರ ತಂಡವು ಪ್ರತಿ ವರ್ಷ ವಿವಿಧ ಬೆಳೆಗಳು ಮತ್ತು ಭೌಗೋಳಿಕ ಪ್ರದೇಶದ ಲಕ್ಷಾಂತರ ರೈತರಿಗೆ ತರಬೇತಿ ನೀಡುತ್ತದೆ. ಈ ಕೆಳಗಿನ ಸಾಧನಗಳನ್ನು ಬಳಸಿಕೊಂಡು ವ್ಯವಸ್ಥಿತ ಕಾರ್ಯಕ್ರಮದ ಮೂಲಕ ಇದನ್ನು ಮಾಡಲಾಗುತ್ತದೆ:

  • ರೈತ ಜಾಗೃತಿ ಕ್ಯಾಂಪ್‌ಗಳು
  • ರೈತ ತರಬೇತಿ ಕ್ಯಾಂಪ್‌ಗಳು
    • ಕ್ಲಾಸ್‌ರೂಮ್ ತರಬೇತಿ
    • ಕೃಷಿ ಭೂಮಿಯಲ್ಲಿ ತರಬೇತಿ
  • ಕ್ಷೇತ್ರ ಪ್ರದರ್ಶನಗಳು
  • ಕಟಾವಿನ ದಿನಗಳನ್ನು ಆಯೋಜಿಸುವುದು
  • ಆನ್ಲೈನ್ ರೈತರ ತರಬೇತಿ ಅವಧಿಗಳು ಇತ್ಯಾದಿ.

567

8910

Ugamವಿಶ್ವ ಮಣ್ಣು ಆರೋಗ್ಯ ದಿನ 2020 ರ ವಿಷಯವು 'ಮಣ್ಣನ್ನು ಜೀವಂತವಾಗಿರಿಸಿ, ಮಣ್ಣಿನ ಜೈವಿಕ ವೈವಿಧ್ಯತೆಯನ್ನು ರಕ್ಷಿಸಿ' ಎಂಬುದಾಗಿತ್ತು. ಈ ದಿನ, ಡಿಸೆಂಬರ್ 5 ರಂದು, ಎಫ್ಎಂಸಿ ಇಂಡಿಯಾವು, ಯಶಸ್ವಿ ಕೃಷಿಗಾಗಿ ಮಣ್ಣಿನ ಆರೋಗ್ಯದ ನಿರ್ಣಾಯಕ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದ ಉಗಮ್ ಎಂಬ ನವೀನ ಅಭಿಯಾನವನ್ನು ಪ್ರಾರಂಭಿಸಿತು. ಮಣ್ಣಿನ ನಿರ್ವಹಣೆ, ಮಣ್ಣಿನ ಜೀವವೈವಿಧ್ಯದ ನಷ್ಟ ಮತ್ತು ಕ್ಷೀಣಿಸುತ್ತಿರುವ ಮಣ್ಣಿನ ಪೋಷಣೆಯಲ್ಲಿನ ಸವಾಲುಗಳನ್ನು ಎದುರಿಸುವ ಮೂಲಕ ಆರೋಗ್ಯಕರ ಪರಿಸರ ಮತ್ತು ಮಾನವ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಉಗಮ್ ಹೊಂದಿದೆ.

ಬೆಳೆಯ ಆರೋಗ್ಯ ಮತ್ತು ಉತ್ಪಾದನೆಯ ಗುಣಮಟ್ಟವನ್ನು ನಿರ್ಧರಿಸುವಲ್ಲಿ ಮಣ್ಣಿನ ಆರೋಗ್ಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಣ್ಣಿನ ಆರೋಗ್ಯ ಸಮಸ್ಯೆಗಳು ಮತ್ತು ಸಂಬಂಧಿತ ಹವಾಮಾನ ಬದಲಾವಣೆಯನ್ನು ಕಡಿಮೆ ಮಾಡಲು ಮುಂದಿನ ಕೆಲವು ದಶಕಗಳ ಕೃಷಿ ಅಭ್ಯಾಸಗಳಲ್ಲಿ ಗಮನಾರ್ಹ ಬದಲಾವಣೆ ಆಗಬೇಕು ಎಂದು ನಾವು ನಂಬುತ್ತೇವೆ. ವಿಶ್ವಸಂಸ್ಥೆ, ಎಫ್ಎಒ ಮತ್ತು ಯುಎನ್‌ಡಿಪಿ ಸೇರಿದಂತೆ ವಿಶ್ವದ ಪ್ರಮುಖ ಸಂಸ್ಥೆಗಳು ಮಣ್ಣಿನ ಆರೋಗ್ಯ ಮತ್ತು ಕೃಷಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅನೇಕ ತೊಡಗುವಿಕೆಗಳನ್ನು ಕೈಗೊಳ್ಳುತ್ತಿವೆ. ನಮ್ಮ ಜಾಗತಿಕ ಸುಸ್ಥಿರತೆಯ 'ಚೆನ್ನಾಗಿ ಬೆಳೆಯಿರಿ' ಎಂಬ ಪರಿಕಲ್ಪನೆಯ ಉಗಮ್‌ನೊಂದಿಗೆ, ಈ ಜಾಗತಿಕ ಕಾರ್ಯಗಳನ್ನು ನಮಗೆ ಸಾಧ್ಯವಾದ ರೀತಿಯಲ್ಲಿ ಬೆಂಬಲಿಸುವುದು ನಮ್ಮ ಪ್ರಯತ್ನವಾಗಿದೆ.

ಡಿಸೆಂಬರ್ 5 ರಂದು, ವಿವಿಧ ಸಂವಹನ ಮತ್ತು ಶಿಕ್ಷಣ ಸಾಧನಗಳು, ಮತ್ತು ಮಣ್ಣು ಪರೀಕ್ಷಾ ಕಿಟ್‌ಗಳೊಂದಿಗೆ ಕಸ್ಟಮೈಜ್ ಮಾಡಲ್ಪಟ್ಟ ಮಣ್ಣು ಆರೋಗ್ಯ ವ್ಯಾನ್ ಗುರಿ ಸಾಧಿಸುವ ಉದ್ದೇಶದೊಂದಿಗೆ ನಮ್ಮ ದೇಶದ ಒಳನಾಡುಗಳಲ್ಲಿ ಪ್ರಯಾಣ ಆರಂಭಿಸಿತು. ಈ ವ್ಯಾನ್ ಗುಜರಾತ್ ರಾಜ್ಯದಲ್ಲಿ ಪ್ರಯಾಣ ಆರಂಭಿಸಿತು ಮತ್ತು ಕಂಪನಿಯ ನಾಯಕರು ವರ್ಚುವಲ್ ಆಗಿ ಇದಕ್ಕೆ ಚಾಲನೆ ನೀಡಿದರು. ನಮ್ಮ ಕ್ಷೇತ್ರ ತಂಡಗಳು ದೇಶಾದ್ಯಂತ ಮಣ್ಣು ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಲು, ಇತರ ಚಟುವಟಿಕೆಗಳ ಮೂಲಕ ಸಾವಿರಾರು ರೈತರು, ವಿತರಕರು, ಚಿಲ್ಲರೆ ವ್ಯಾಪಾರಿಗಳು ಮತ್ತು ಇತರ ಪಾಲುದಾರರನ್ನು ತಲುಪಿದವು.

111213

1415